1.12 ವರ್ಷದೊಳಗಿನ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಿ ಸುಮಾರು 45ಕ್ಕಿಂತ ಹೆಚ್ಚಿನ ಮಕ್ಕಳನ್ನು ಸಾಕಿ, ಒಳ್ಳೆಯ ಭವಿಷ್ಯ ನೀಡಿದ ಸಾರ್ಥಕತೆ.
2. ಜೆ.ಪಿ. ನಗರ, ಕಾಕ್ಸ್ ಟೌನ್ ಹಾಗೂ ಹಲವಾರು ಕೊಳಚೆ ಪ್ರದೇಶಗಳಲ್ಲಿನ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ, ನೋಟ್ ಬುಕ್ ಇತ್ಯಾದಿ ಪರಿಕರಗಳನ್ನು ಪ್ರತಿ ವರ್ಷ ವಿತರಿಸುತ್ತಿರುವುದು. ಹಿರಿಯರಿಗೆ ಕಂಬಳಿ, ಸೀರೆ ಇತ್ಯಾದಿ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು.
3. ಕೊಳಚೆ ಪ್ರದೇಶದ ಹೆಣ್ಣು ಮಕ್ಕಳಿಗೆ ನೃತ್ಯ ಹಾಗೂ ಹಾಡುಗಾರಿಕೆಯನ್ನು ಕಲಿಸಿ, ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು.
4. ನಿರಂತರವಾಗಿ ರಕ್ತದಾನ ಮಾಡುತ್ತಿರುವುದು. ಇದರ ಜೊತೆಗೆ ನೂರಾರು ಉಚಿತ ರಕ್ತದಾನ. ನೇತ್ರದಾನ, ದಂತ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುತ್ತಿರುವುದು. ಆಸ್ಪತ್ರೆಗಳಲ್ಲಿನ ಬಡರೋಗಿಗಳಿಗೆ ಔಷಧ, ಹಣ್ಣು ವಿತರಿಸುತ್ತಿದ್ದು, ಕಡು ಬಡ ರೋಗಿಗಳಿಗೆ ಹಣಕಾಸಿನ ನೆರವು ಹಾಗೂ ಸಾಂತ್ವಾನ ನೀಡುತ್ತಿರುವುದು.
5. ಎಸ್.ಓ.ಎಸ್. ಮಕ್ಕಳಿಗಾಗಿ ಎಲ್ಲಾ ರೀತಿಯಲ್ಲೂ ನೆರವು ನೀಡುತ್ತಿರುವುದು.
6. ರಮಣ ಮಹರ್ಷಿ ಅಂಧ ಮಕ್ಕಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿರುವುದು.
7.ಹಲವಾರುದೇವಸ್ಥಾನಗಳ ನಿರ್ಮಾಣಕ್ಕೆ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಎಲ್ಲಾ ರೀತಿಯ ನೆರವು ನೀಡುತ್ತಿರುವುದು.
8. ಸ್ವಂತ ಊರಿನಲ್ಲಿ (ಚಿಕ್ಕ ಹೊಸಳ್ಳಿ, ಆನೇಕಲ್ ತಾಲ್ಲೂಕು) ತಮ್ಮ ಸ್ವಂತ ಎರಡು ಎಕರೆ ಜಮೀನಿನಲ್ಲಿಶಾಲೆಯನ್ನು ನಿರ್ಮಿಸಿ ಸರ್ಕಾರಕ್ಕೆ ಶಾಲೆ ನಡೆಸಲು ನೀಡಿರುವುದು.
9. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ ಅವರಿಗೆ ಬೇಕಾದ ಕ್ರೀಡಾ ಪರಿಕರಗಳನ್ನು ಒದಗಿಸುತ್ತಿರುವುದು.
10. ಹಲವಾರು ಕಿರು ಚಿತ್ತಗಳನ್ನು ನಿರ್ಮಿಸಿ ಬಾಲ ಕಾರ್ಮಿಕರ ಸಮಸ್ಯೆ, ವರದಕ್ಷಿಣೆ ಪಿಡುಗು, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಇತ್ಯಾದಿಗಳ ಬಗ್ಗೆ ಪ್ರತಿಬಿಂಬಿಸಿ, ಸಾಮಾಜಿಕ ಪಿಡುಗುಗಳನ್ನು ಪರಿಹರಿಸಲು ಸತತ ಪ್ರಯತ್ನ.
11. ಇತ್ತೀಚಿಗೆ ಭಾರಿ ಮಳೆಯಿಂದ ನಿರಾಶ್ರಿತರಾದ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಲಿಸುವಲ್ಲಿ ಸಕ್ರಿಯ ಪಾತ್ರ ವಹಿಸಿರುವುದು. ಎಲ್ಲಕ್ಕಿಂತ ಮಿಗಿಲಾಗಿ, ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದ ನೆರೆಸಂತ್ರಸ್ತರ ಪುನರ್ವಸತಿಗಾಗಿ ಸ್ವತಃ ಬೀದಿ ಬೀದಿಗಳಿಗೆ ಹಾಗೂ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ಹಣವನ್ನು ಸಂಗ್ರಹಿಸಿ ಸನ್ಮಾನ್ಯ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡಿರುವುದು ನಿಜಕ್ಕೂ ಸ್ತುತ್ಯಾರ್ಹವಾದುದು.
12. ಬಾಲ್ ಬ್ಯಾಟ್ ಮಿಂಟನ್, ಥ್ರೋಬಾಲ್, ಕೇರಂ ಇತ್ಯಾದಿ ಕ್ರೀಡೆಗಳಲ್ಲಿ ಸ್ವತಃ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದ ಹೆಗ್ಗಳಿಗೆ.
13. ದೂರದರ್ಶನದ ಖಾಸಗಿ ವಾಹಿನಿಯಲ್ಲಿ ಒಂದು 'ರಿಯಾಲ್ಟಿ ಷೋ' ಏರ್ಪಡಿಸಿ, ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿ, ಅನೇಕ ಸಂಸಾರಗಳನ್ನು ಒಂದುಗೊಡಿಸಿದ ಸಮಾಧಾನ. |